ಪೋಸ್ಟ್‌ಗಳು

ಸಾಧನೆಯ ಹಾದಿ | ಮಕ್ಕಳ ಕಥೆ | ವೆಂಕಟೇಶ ಚಾಗಿ | sadhaneya hadi | makkala kathe | venkatesh chagi | story

ಇಮೇಜ್
     ಸಾಧನೆಯ ಹಾದಿ ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು.  ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೆ ಮಾಡುತ್ತಿದ್ದನು. ರಾಮಯ್ಯನಿಗೆ ಒಬ್ಬ ಮಗನಿದ್ದನು. ಅವನ ಹೆಸರು  ಕಮಲಾಕರ ಎಂದು. ಕಮಲಾಕರ ಅಪ್ಪನ ವಿರುದ್ದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಾಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ರಾಮಯ್ಯನೊಂದಿಗೆ ವಾಗ್ವಾದ ಮಾಡಿ ಶಾಸ್ತ್ರಾಭ್ಯಾಸಗಳಲ್ಲಿ ತೊಡಗುತ್ತಿದ್ದನು. ಕಾಯಕದ ಅರಿವಿಲ್ಲದ ಕಮಲಾಕರ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದನು. ಆದರೂ ತನ್ನ ತಂದೆ ರಾಮಯ್ಯ ನಿಗೆ " ನೋಡುತ್ತಿರು ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾಧ್ಯವಿಲ್ಲ. ನೀನೋ ಅನಕ್ಷರಸ್...

ಮಕ್ಕಳ ಪಾಠ | ಮಕ್ಕಳ ಕಥೆ | ವೆಂಕಟೇಶ ಚಾಗಿ | makkala kathe | makkala paata | venkatesh chagi

ಇಮೇಜ್
      ಮಕ್ಕಳ  ಪಾಠ ಅನೇಕ ವರ್ಷಗಳ ಹಿಂದೆ ಅನಂತಪುರ ಎಂಬ ರಾಜ್ಯದಲ್ಲಿ ಸೂರ್ಯಕುಮಾರ ಎಂಬ ರಾಜ ಆಳ್ವಿಕೆ ನಡೆಸುತ್ತಿದ್ದನು. ರಾಜನು ತುಂಬಾ ಬಲಶಾಲಿಯಾಗಿದ್ದ. ತನ್ನ ರಾಜ್ಯದ ಸುತ್ತಮುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ರಾಜರನ್ನು ಸೋಲಿಸಿ ಅವರಿಂದ ಅಪಾರ ಕಪ್ಪು ಕಾಣಿಕೆಗಳನ್ನು ಹೊತ್ತು ತರುತ್ತಿದ್ದ. ಇದರಿಂದಾಗಿ ಅವನ ಖಜಾನೆಯು ಧನಕನಕಾಧಿಗಳಿಂದ ತುಂಬಿಹೋಗಿತ್ತು. ರಾಜನಿಗೆ ರಾಜ್ಯದ ಆಡಳಿತ ಹಾಗೂ ಪ್ರಜೆಗಳ ಸುಖ ದುಃಖಗಳ ಕಡೆಗೆ ಗಮನ ಹರಿಸಲು ಸಮಯವೇ ಸಿಗುತ್ತಿರಲಿಲ್ಲ.  ಒಮ್ಮೆ ರಾಜನ ಮೇಲೆ ದೂರದ ರಾಜ್ಯದ ರಾಜನೊಬ್ಬ ದಂಡೆತ್ತಿ ಬಂದ . ಅವನ ಅಪಾರ ಸೈನ್ಯದ ಎದುರು ಸೂರ್ಯಕುಮಾರನ ಸೈನ್ಯ ಜರ್ಜರಿತವಾಯಿತು . ಸೈನಿಕರ ಮನೋಸ್ಥೈರ್ಯ ಕುಸಿಯಿತು. ಸೈನಿಕರೆಲ್ಲಾ ಜೀವಭಯದಿಂದ ದಿಕ್ಕಾಪಾಲಾಗಿ ಹೋಡಿದರು. ದಂಡೆತ್ತಿ ಬಂದ ರಾಜ ಅರಮನೆಯಲ್ಲಿದ್ದ ಖಜಾನೆಯನ್ನು ಲೂಟಿ ಮಾಡಿ ಖಜಾನೆಯಲ್ಲಿದ್ದ ಧನಕನಕಾಧಿಗಳನ್ನು ನೂರಾರು ಕುದುರೆಗಳ ಮೇಲೆ ಹೇರಿಕೊಂಡು ತನ್ನ ರಾಜ್ಯದತ್ತ ಮುಖಮಾಡಿದ. ಸೂರ್ಯಕುಮಾರ ಎಲ್ಲವನ್ನೂ ಕಳೆದುಕೊಂಡು ದಂಡೆತ್ತಿ ಬಂದ ರಾಜನಿಂದ ಪಾರಾಗಿ ಮಾರುವೇಷದಿಂದ ದೂರದ ಒಂದು ಗ್ರಾಮದತ್ತ ತೆರಳಿ ಆ ಗ್ರಾಮದ ಊರ ಹೊರಗಿನ ಒಂದು ಆಲದ ಮರವನ್ನು ಏರಿ ಕುಳಿತುಕೊಂಡ.  ಸ್ವಲ್ಪ ಸಮಯದ ನಂತರ ಆನದ ಮರದ ಕೆಳಗೆ ಆ ಗ್ರಾಮದ ಕೆಲವು  ಮಕ್ಕಳ ು ಬಂದು ಆಟವಾಡತೊಡಗಿದರು.  ಮಕ್ಕಳ  ಆಟ ತುಂಟಾಟಗಳನ್ನು ಕಂಡು ರ...